MUDDEBIHAL ಉತ್ತಮ ಜಿಲ್ಲಾಧ್ಯಕ್ಷ ಪ್ರಶಸ್ತಿ ಪುರಸ್ಕೃತ ಶಿವಕುಮಾರಗೆ ಸನ್ಮಾನ !

Bhima Samskruthi
By -
0

ಮುದ್ದೇಬಿಹಾಳ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಕರಾಟೆ ಶಿಕ್ಷಕರ ಸಂಘದಿಂದ ಕೊಡಮಾಡುವ ಉತ್ತಮ ಜಿಲ್ಲಾ ಅಧ್ಯಕ್ಷ ಪ್ರಶಸ್ತಿ ಪುರಸ್ಕೃತ ಸ್ಥಳೀಯ ಕರಾಟೆ ಶಿಕ್ಷಕ ಶಿವಕುಮಾರ ಶಾರದಳ್ಳಿ ಅವರನ್ನು 
ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಎ. ಆರ್. ಮುಲ್ಲಾ, ಎಂ. ಜಿ ವ್ಹಿ. ಸಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರು ಸಾಹಿತಿಗಳಾದ ಡಾ. ಪ್ರಕಾಶ ಎನ್ ನರಗುಂದ ಹಾಗೂ ಶಿಕ್ಷಕರಾದ ಎಲ್. ಎಂ ಚಲವಾದಿ ಅವರು ಶಾರದಳ್ಳಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
 ಇದೇ ಸಂದರ್ಭದಲ್ಲಿ ಶಾರದಳ್ಳಿ 
ಕರಾಟೆ ಶಿಕ್ಷಕನಾಗಿ, ಕ್ರೀಡಾ ಪ್ರೋತ್ಸಾಹಕನಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುವದರ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರ ಸೇರಿ ಇತರೆ ಕ್ಷೇತ್ರಗಳಲ್ಲಿ ಇವರ ಪರಿಶ್ರಮದ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
Tags:

Post a Comment

0Comments

Post a Comment (0)